Wednesday, August 8, 2012

ಜಿಲ್ಲಾಧ್ಯಕ್ಷರ ಹಾಗೂ ಸರ್ವಸದಸ್ಯರ ಸಭೆ

ಪ್ರಿಯ ಸಹೋದ್ಯೋಗಿ ಮಿತ್ರರೇ,
                                   ದಿನಾಂಕ 11-08-2012 ಮತ್ತು 12-08-2012 ರಂದು ಶರ್ಮಾಜೀಯವರ ನೇತೃತ್ವದಲ್ಲಿ ಹುಬ್ಬಳ್ಳಿಯ ವಿಶ್ವಶ್ರಮಚೇತನದಲ್ಲಿ ಸರ್ವ ಸದಸ್ಯರ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ದಿನಾಂಕ 11-08-2012 ರಂದು  ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರುಗಳಿಗೆ ಅತಿ ಮುಖ್ಯವಾದ ಸಭೆಯಿದ್ದು ಪ್ರತಿಯೊಬ್ಬ ಜಿಲ್ಲಾಧ್ಯಕ್ಷರು ಕೂಡ ತಪ್ಪದೇ ಹಾಜರಾಗಬೇಕಾಗಿ ಕೋರಲಾಗಿದೆ ಹಾಗೆಯೇ ದಿನಾಂಕ 12-08-2012 ರಂದು 'ಸರ್ವಸದಸ್ಯರ ಸಭೆ'ಯಿದ್ದು ರಾಜ್ಯದ ಎಲ್ಲಾ ನೆಮ್ಮದಿ ನೌಕರರನ್ನು(1600) ಸಭೆಗೆ ಭಾಗವಹಿಸಲು ಆಹ್ವಾನಿಸಲಾಗಿದೆ. ಎರಡು ದಿನ ನಡೆಯುವ ಸಭೆಯು ಅತಿ ಮುಖ್ಯವಾಗಿದ್ದು ಮೊದಲ ದಿನ ಜಿಲ್ಲಾಧ್ಯಕ್ಷರುಗಳು ಹಾಗೂ ಎರಡನೇ ದಿನ ರಾಜ್ಯದ ಪ್ರತಿ ನೆಮ್ಮದಿ ನೌಕರರು ಹಾಜರಿರುವುದು ಅತಿ ಅವಶ್ಯಕವಾಗಿದೆ. ನಿಮ್ಮ ಯಾವುದೇ ಅನುಮಾನದ ಪ್ರಶ್ನೆಗಳಿದ್ದರೂ ಸಭೆಯಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಹಾಗೆಯೇ ತಮ್ಮ ಅನಿಸಿಕೆ, ಸಲಹೆಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ, ಜೊತೆಗೆ ಇಲ್ಲೀವರೆಗೂ 'ನೆಮ್ಮದಿ ಕೇಂದ್ರಗಳ ನೌಕರರ ಸಂಘ(ರಿ)'ವು ನಮ್ಮೆಲ್ಲರನ್ನೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ವಿಲೀಯನಗೊಳಿಸಲು ನಡೆಸಿದ ಪ್ರಯತ್ನಗಳು ಹಾಗೂ ಪ್ರಗತಿಗಳ ಬಗ್ಗೆ ಇಲ್ಲಿ ವಿಚಾರಿಸಬಹುದಾಗಿದೆ. ಸಭೆಗೆ ಬರುವಾಗ ಪ್ರತಿ ನೆಮ್ಮದಿ ನೌಕರರು ಸದಸ್ಯತ್ವ ಅರ್ಜಿ(ಫಾರ್ಮ್)ಯನ್ನು ಭರ್ತಿ ಮಾಡಿ ತರತಕ್ಕದ್ದು ಮತ್ತು ಅರ್ಜಿಗಳು ತಮ್ಮಲ್ಲಿ ಇಲ್ಲದಿದ್ದರೆ ತಮ್ಮ ಜಿಲ್ಲಾಧ್ಯಕ್ಷರನ್ನು ಕೇಳಿ ಪಡೆಯತಕ್ಕದ್ದು. ಆದ್ದರಿಂದ ಪ್ರಿಯ ಮಿತ್ರರೇ ಸರ್ವಸದಸ್ಯರ ಸಭೆಯು ಅತಿ ಪ್ರಮುಖವಾಗಿದ್ದು ಪ್ರತಿಯೊಬ್ಬರು ಹಾಜರಿರಲೇಬೇಕೆಂದು ಇನ್ನೊಮ್ಮೆ ನೆನಪಿಸುತ್ತಿದ್ದೇವೆ.






ಸೂಚನೆ: ಸಂದೇಶವನ್ನು ತಮ್ಮೆಲ್ಲ ಸಹೋದ್ಯೋಗಿ ಮಿತ್ರರಿಗೂ ತಿಳಿಸಿ.


ಅಧ್ಯಕ್ಷರು

ನೆಮ್ಮದಿ ಕೇಂದ್ರಗಳ ನೌಕರರ ಸಂಘ

ವಿಶ್ವಶ್ರಮಚೇತನ, ಹುಬ್ಬಳ್ಳಿ


MARANAYAKA G H
9741850214